ಟಾಟಾ ಕ್ಯಾಪಿಟಲ್ ಆ್ಯಪ್ ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ಆಲ್-ಇನ್-ಒನ್ ವೇದಿಕೆಯಾಗಿದೆ.ಈಗಲೇ ಡೌನ್ಲೋಡ್ ಮಾಡಿ

ನಾಗರಾಜ್ ಇಜಾರಿ - ಬಾಹ್ಯ ನಿರ್ದೇಶಕರು

ನಾಗರಾಜ್ ಇಜಾರಿ

ಸ್ವತಂತ್ರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರು

ಶ್ರೀ ನಾಗರಾಜ್ ಇಜಾರಿ ಅವರು IT ಉದ್ಯಮದಲ್ಲಿ 35 ವರ್ಷಗಳಿಗಿಂತ ಹೆಚ್ಚು ಕಾಲದ ಅಮೂಲ್ಯ ಅನುಭವ ಮತ್ತು ಉದ್ಯಮದ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಲ್ಲಿ 30 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸುತ್ತಾ, ಅವರು ಸಂಸ್ಥೆಯ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಅದಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಶ್ರೀ ಇಜಾರಿ ಅವರು TCS ನಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ - ಅವುಗಳೆಂದರೆ ಕಾರ್ಯತಂತ್ರದ ಚಿಂತನೆ, ಕಾರ್ಯನಿರ್ವಾಹಕ ಮೇಲ್ವಿಚಾರಣೆ ಮತ್ತು ಪರಿಣಾಮ, ದೊಡ್ಡ ಪ್ರಮಾಣದ ಬದಲಾವಣೆ, ಕಾರ್ಯಪಡೆಯನ್ನು ಪರಿವರ್ತಿಸುವುದು ಮತ್ತು ತೊಡಗಿಸಿಕೊಳ್ಳುವುದು, ಮಾರಾಟ, P&L ನಿರ್ವಹಣೆ, ವ್ಯವಹಾರ ಮತ್ತು IT ತಂತ್ರವನ್ನು ಹೊಂದಿಸುವುದು, ಪ್ರತಿಭೆ ತಂತ್ರ ಅಭಿವೃದ್ಧಿ, ಜಾಗತಿಕ ಅಕೌಂಟ್ ನಿರ್ವಹಣೆ, ಡೆಲಿವರಿ ನಿರ್ವಹಣೆ ಮತ್ತು ಗ್ರಾಹಕ ಸಂಬಂಧ ನಿರ್ವಹಣೆ. ಶ್ರೀ ಇಜಾರಿ ಅವರು ವ್ಯಾಪಕ ಶ್ರೇಣಿಯ ಸಂಸ್ಕೃತಿಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಗ್ರಾಹಕರು ಮತ್ತು ಕೆಲಸಗಾರರೊಂದಿಗೆ ಕೆಲಸ ಮಾಡಿದ್ದಾರೆ.

ಶ್ರೀ ಇಜಾರಿ ಅವರು ಹೈ-ಟೆಕ್ ಮತ್ತು ವೃತ್ತಿಪರ ಸೇವೆಗಳ ಜಾಗತಿಕ ಬಿಸಿನೆಸ್ ಘಟಕವನ್ನು ಸ್ಥಾಪಿಸಿದ್ದಾರೆ ಮತ್ತು ಬೆಳೆದ ಘಟಕವನ್ನು ಗಮನಾರ್ಹವಾಗಿ ಸ್ಥಾಪಿಸಿದ್ದಾರೆ ಮತ್ತು 12 ವರ್ಷಗಳವರೆಗೆ ಈ ಬಿಸಿನೆಸ್ ಅನ್ನು ನಡೆಸಿದ್ದಾರೆ. ಬೆಂಗಳೂರಿನ TCS ಘಟಕದ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ, ಅವರು ಶಾಖೆಯ ಗಮನಾರ್ಹ ಬೆಳವಣಿಗೆಗೆ ಕಾರಣವಾಗಿದ್ದಾರೆ.

ಹೈ-ಟೆಕ್ ಮತ್ತು ವೃತ್ತಿಪರ ಸೇವೆಗಳ ಬಿಸಿನೆಸ್ ಘಟಕದ ಮುಖ್ಯಸ್ಥರಾಗಿ, ಅವರು ಗ್ರಾಹಕರ ಬಿಸಿನೆಸ್ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರಗಳನ್ನು ಸೃಷ್ಟಿಸುವುದು, ಬಿಸಿನೆಸ್ ಮಾಡೆಲ್ ಪರಿವರ್ತನೆ, ನಾವೀನ್ಯತೆ, ಹೊಸ ಪ್ರದೇಶಗಳ ವಿಸ್ತರಣೆ ಮತ್ತು ಅಭಿವೃದ್ಧಿ, ಹೊಸ ಮಾರುಕಟ್ಟೆ ವಿಭಾಗಗಳ ಅಭಿವೃದ್ಧಿ, ಸುಸ್ಥಿರ ಮತ್ತು ಲಾಭದಾಯಕ ಆದಾಯ ಬೆಳವಣಿಗೆಯನ್ನು ಮುನ್ನಡೆಸುವುದರ ಜೊತೆಗೆ ತಂತ್ರಜ್ಞಾನ ಮತ್ತು ಕ್ಷೇತ್ರದ ಸಾಮರ್ಥ್ಯಗಳ ಅಭಿವೃದ್ಧಿಗೆ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದಾರೆ. ಕ್ಷೇತ್ರದ ಮತ್ತು ಚಿಂತನಾತ್ಮಕ ನಾಯಕತ್ವದ ಪರಿವರ್ತನೆಯಲ್ಲಿ ತೊಡಗುವ ಮೂಲಕ, ಅವರು ವಿವಿಧ ಉದ್ಯಮ ವಿಭಾಗಗಳಲ್ಲಿ ನಾಯಕತ್ವದ ಸ್ಥಾನವನ್ನು ಸ್ಥಾಪಿಸಿದ್ದಾರೆ.

2002 ರಿಂದ TCS ಬೆಂಗಳೂರು ಕಾರ್ಯಾಚರಣೆಗಳ ಮುಖ್ಯಸ್ಥರಾಗಿ, ಕೇವಲ 3,000 ಉದ್ಯೋಗಿಗಳಿಂದ 60,000 ಕ್ಕೂ ಹೆಚ್ಚು ಉದ್ಯೋಗಿಗಳ ತಂಡವನ್ನು ಬೆಳೆಸಿ ಬೆಂಗಳೂರಿನ TCS ಘಟಕದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರ್ಯತಂತ್ರದ ಯೋಜನೆ, ಡೆಲಿವರಿ ಶ್ರೇಷ್ಠತೆ, ಕಲಿಕೆ ಮತ್ತು ಅಭಿವೃದ್ಧಿ, ಮೂಲಸೌಕರ್ಯ ಯೋಜನೆ, ನಾಯಕತ್ವ ಅಭಿವೃದ್ಧಿ, ಜನ ನಿರ್ವಹಣೆ ಇತ್ಯಾದಿಗಳು ಈ ಹುದ್ದೆಯ ಪ್ರಮುಖ ಅಂಶಗಳಾಗಿವೆ.

ಶ್ರೀ ಇಜಾರಿ 2002 ರಿಂದ TCS ಗ್ಲೋಬಲ್ ಎಗ್ಸಿಕ್ಯುಟಿವ್ ತಂಡದ ಭಾಗವಾಗಿದ್ದಾರೆ.

ಅವರು 2019 ರಲ್ಲಿ TCS ನಿಂದ ನಿವೃತ್ತರಾದರು ಮತ್ತು Sri Dharamasthala Manjunatha Institute of Management Development ಮಂಡಳಿಯಲ್ಲಿದ್ದಾರೆ.

ಶ್ರೀ ಇಜಾರಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಟೆಕ್ಸ್‌ಟೈಲ್ ಎಂಜಿನಿಯರಿಂಗ್‌ನಲ್ಲಿ B. Tech ಪದವಿ ಹೊಂದಿದ್ದಾರೆ. ಅವರು 2011 ರಲ್ಲಿ Harvard Business School ನ ಅಡ್ವಾನ್ಸ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ (AMP181) ಅನ್ನು ಪೂರ್ಣಗೊಳಿಸಿದ್ದಾರೆ. ಶ್ರೀ ಇಜಾರಿ ಅವರು ಹಲವಾರು ವರ್ಷಗಳಿಂದ Bangalore Chamber of Commerce and Industry ಯ ಮ್ಯಾನೇಜ್ಮೆಂಟ್ ಕಮಿಟಿಯಲ್ಲಿದ್ದಾರೆ ಮತ್ತು ಅವರ ಊರು, ನಮ್ಮ ಭಾರತದ ಬೆಂಗಳೂರು.

ವಂಚನೆಗಳ ಬಗ್ಗೆ ಎಚ್ಚರದಿಂದಿರಿ!

  • fraud-img

    https://www.tatacapital.com ರಿಂದ ಆರಂಭವಾಗುವ ಲಿಂಕ್‌ಗಳನ್ನು ನಂಬಿ

  • fraud-img

    ಯಾವುದೇ ವ್ಯಕ್ತಿಯ ಬ್ಯಾಂಕ್ ಅಕೌಂಟ್‌ಗಳಲ್ಲಿ ಪಾವತಿಗಳನ್ನು ಮಾಡಬೇಡಿ.

  • customer-care-icon

    ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯವಾಣಿ ನಂಬರ್ 1860 267 6060 ಗೆ ಕರೆ ಮಾಡಿ

ಯಾವುದೇ ಸಹಾಯಕ್ಕಾಗಿ, ನಮ್ಮ ಗ್ರಾಹಕ ಸಹಾಯ ವನ್ನು ಸಂಪರ್ಕಿಸಿ